ತೆಂಗು ಬೆಳೆಗಾರರೇ ಗಮನಿಸಿ, ಬೆಳೆ ವಿಮಾ ಯೋಜನೆ

ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ರೈತರು ತೆಂಗು ಬೆಳೆಯುತ್ತಾರೆ. ಆದರೆ ತೆಂಗಿನ ಗಿಡಗಳು, ಮರಗಳು ವಿವಿಧ ರೋಗಗಳಿಗೆ ತುತ್ತಾಗಿ ರೈತರಿಗೆ ನಷ್ಟವಾಗುತ್ತದೆ. ಆದ್ದರಿದ ತೆಂಗಿನ ಬೆಳೆಗಾರರಿಗೆ ನೆರವಾಗಲು ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ತೆಂಗು ಬೆಳೆಯುವ ರೈತರು ಈ ವಿಮಾ ಯೋಜನೆಯ ಮಾಹಿತಿ, ಬೇಕಾಗುವ ದಾಖಲೆಗಳ ಕುರಿತು ಮಾಹಿತಿ ತಿಳಿದಿರುವುದು ಅಗತ್ಯವಾಗಿದೆ.ತೆಂಗು ಬೆಳೆ ವಿಮಾ ಯೋಜನೆ ತೆಂಗಿನ ಗಿಡ/ ಮರಗಳಿಗೆ ಇರುವ ವಿಮಾ ಯೋಜನೆಯಾಗಿದ್ದು, ತೆಂಗು ಅಭಿವೃದ್ಧಿ, ಮಂಡಳಿಯವರು Agriculture insurance company ಅವರ ಸಹಯೋಗದೊಂದಿಗೆ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಆರೋಗ್ಯವಂತ ತೆಂಗಿನ ಗಿಡಗಳು/ ಮರಗಳು (4 ರಿಂದ 60 ವರ್ಷ) ವಿಮೆಯ ವ್ಯಾಪ್ತಿಗೆ ಒಳಪಡುತ್ತವೆ. ರೈತರು ಕನಿಷ್ಠ 5 ತೆಂಗಿನ ಗಿಡಗಳು/ ಮರಗಳನ್ನು ಕಡ್ಡಾಯವಾಗಿ ವಿಮೆಗೆ ಒಳಪಡಿಸಬೇಕು 5ಕ್ಕಿಂತ ಕಡಿಮೆ ಸಂಖ್ಯೆ, ತೆಂಗಿನ ಮರಗಳು/ ಗಿಡಗಳು ಈ ವಿಮೆಯ ವ್ಯಾಪ್ತಿಗೆ ಒಳಪಡುವುದಿಲ್ಲ.

ಹವಾಮಾನ ವೈಪರಿತ್ಯದಿಂದ, ಕೀಟ ಮತ್ತು ರೋಗದಿಂದ, ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದಲ್ಲಿ, ಬರಗಾಲ, ಆಲಿಕಲ್ಲು, ಸಿಡಿಲು ಬಡಿತದಿಂದ ತೆಂಗಿನ ಗಿಡಗಳು/ ಮರಗಳು ಸಂಪೂರ್ಣ ಹಾನಿಯಾಗಿ ಸತ್ತು ಹೋದಲ್ಲಿ ಹಾನಿ ಸಂಭವಿಸಿದ 15 ದಿನಗಳೊಳಗಾಗಿ ವಿಮಾ ಕಂಪನಿಗೆ ತಿಳಿಸುವುದು ಕಡ್ಡಾಯವಾಗಿರುತ್ತದೆ.

ತಂಗು ಬೆಳೆ ವಿಮೆ ಕಂತಿನ ವಿವರಗಳು: ಈ ವಿಮಾ ಯೋಜನೆಯನ್ನು ತೆಂಗಿನ ಗಿಡ/ ಮರದ ವಯಸ್ಸಿನ ಆಧಾರದ ಮೇಲೆ ಮಾಡಲಾಗಿದೆ. 4 ರಿಂದ 15 ವರ್ಷದ ಗಿಡ/ ಮರ ವಿಮಾ ಮೊತ್ತ ಪ್ರತಿ ಮರ/ ಗಿಡಕ್ಕೆ 900 ರೂ., ಶೇ 25 ರಂತೆ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಪ್ರತಿ ಮರಕ್ಕೆ/ ಗಿಡ/ ವರ್ಷಕ್ಕೆ ಮರಕ್ಕೆ/ ಗಿಡಕ್ಕೆ 2.25 ರೂ., ಸರ್ಕಾರದ ವಂತಿಕೆ ಮರಕ್ಕೆ/ ಗಿಡಕ್ಕೆ ಶೇ 50 ಸಿಬಿಡಿ + ಶೇ 25 ರಾಜ್ಯ ಸರ್ಕಾರ 6.75 ರೂ.ಗಳು.ಇದೇ ಮಾದರಿಯಲ್ಲಿ 16 ರಿಂದ 60 ವರ್ಷದ ಮರಕ್ಕೆ/ ಗಿಡಕ್ಕೆ 1750 ರೂ.ಗಳು. ಶೇ 25 ರಂತೆ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಪ್ರತಿ ಮರಕ್ಕೆ/ ಗಿಡ/ ವರ್ಷಕ್ಕೆ ಮರಕ್ಕೆ/ ಗಿಡಕ್ಕೆ 3.50 ರೂ., ಸರ್ಕಾರದ ವಂತಿಕೆ ಮರಕ್ಕೆ/ ಗಿಡಕ್ಕೆ ಶೇ 50 ಸಿಬಿಡಿ + ಶೇ 25 ರಾಜ್ಯ ಸರ್ಕಾರ 10.50 ರೂ.ಗಳು.

ಮೇಲೆ ತಿಳಿಸಿರುವಂತೆ ಆಸಕ್ತ ಫಲಾನುಭವಿಗಳು ರೈತರ ವಂತಿಕೆಯನ್ನು ಮತ್ತು ನಿಗದಿತ ನಮೂನೆಯಲ್ಲಿ, ಅರ್ಜಿಯನ್ನು ಭರ್ತಿಮಾಡಿ ಸಂಬಂಧಿಸಿದ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಲ್ಲಿಸಿ ಸದರಿ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಬಹುದು.