ತೆಂಗಿನ ಕಾಯಿ, ಎಳನೀರು ಕೊಯ್ಲು ಮಾಡುವವರಿಗೆ ವಿಮಾ ಯೋಜನೆ, ವಿವರಗಳು

ತುಮಕೂರು ಜಿಲ್ಲೆಯಲ್ಲಿನ ಪ್ರಮುಖ ಬೆಳೆ ತೆಂಗು. ತೆಂಗಿನ ಕಾಯಿ ಅಥವಾ ಎಳನೀರು ಕೊಯ್ಲು ಮಾಡುವ ಗೊನೆಗಾರರು ಅನೇಕ ಬಾರಿ ಅಪಘಾತಗಳಿಗೆ ತುತ್ತಾಗುತ್ತಾರೆ. ಇಂತಹ ಗೊನೆಗಾರರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ವಿಮಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ವಿಮಾ ಯೋಜನೆಯ ಮಾಹಿತಿ, ಬೇಕಾಗುವ ದಾಖಲೆಗಳ ಕುರಿತು ಮಾಹಿತಿಯನ್ನು ನೀಡಲಾಗಿದೆ. ‘ಗೊನೆಗಾರರಿಗೆ ಕೇರಾ ಸುರಕ್ಷಾ ವಿಮಾ ಯೋಜನೆ‘ ಎಂಬ ಹೆಸರಿನಲ್ಲಿ ತೆಂಗಿನ ಕಾಯಿ ಅಥವಾ ಎಳನೀರು ಕೊಯ್ಲು ಮಾಡುವ ಅನುಭವಿ ಗೊನೆಗಾರರಿಗೆ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಸುಲಭ ಕಂತುಗಳನ್ನು ಪಾವತಿ ಮಾಡುವ ಮೂಲಕ ಗೊನೆಗಾರರು ಈ ವಿಮಾ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ. ವಿಮಾ ಯೋಜನೆಯ ಉದ್ದೇಶಗಳು: ಗೊನೆಗಾರರಿಗೆ ಕೇರಾ ಸುರಕ್ಷಾ ವಿಮಾ ಯೋಜನೆಯು ವೈಯಕ್ತಿಕ ಅಪಘಾತ ವಿಮಾ ಯೋಜನೆ ಆಗಿದ್ದು, ತೆಂಗು ಅಭಿವೃದ್ಧಿ ಮಂಡಳಿಯವರು ದಿ ನ್ಯೂ ಇಂಡಿಯಾ …

Read more

ಕೆಆರ್‌ಎಸ್‌ ಡ್ಯಾಂನಿಂದ ಕೃಷಿಗೆ ನೀರು, ವೇಳಾಪಟ್ಟಿ ಬಿಡುಗಡೆ

ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರಿಸಿದೆ. ಆದ್ದರಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜಸಾಗರ (ಕೆಆರ್‌ಎಸ್) ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಜನವರಿಯಲ್ಲಿಯೂ ಸಹ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ 124 ಅಡಿ ಇದೆ. ಇದರಿಂದಾಗಿ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಅಲ್ಲದೇ ಕೃಷಿ ಚಟುವಟಿಕೆಗೆ ಸಹ ನೀರು ಸಿಗಲಿದೆ ಎಂದು ರೈತರು ಸಂತಸಗೊಂಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಎನ್. ಚಲುವರಾಯಸ್ವಾಮಿ, “ಕೆಆರ್‌ಎಸ್ ಡ್ಯಾಂನಿಂದ ಬೆಳೆಗಳಿಗೆ ಜನವರಿ 10 ರಿಂದ 18 ದಿನಗಳು ಕಟ್ಟು ಪದ್ಧತಿಯಲ್ಲಿ ನೀರು ಹರಿಸಲಾಗವುದು” ಎಂದು ಹೇಳಿದರು. ಕೃಷಿಗೆ ನೀರು ಬಿಡುಗಡೆ ವೇಳಾಪಟ್ಟಿ: ಎನ್. ಚಲುವರಾಯಸ್ವಾಮಿ ಮಾತನಾಡಿ, “ಜನವರಿ 10 ರಿಂದ 18 ದಿನಗಳ ಕಾಲ ನೀರು ಹರಿಸಲಾಗುವುದು. 12 ದಿನಗಳ ಕಾಲ ನೀರು ನಿಲುಗಡೆ ಇದೇ …

Read more

‘ಕುಸುಮ್ ಬಿ’ ಯೋಜನೆ ರೈತರು ಸೋಲಾರ್‌ ಪಂಪ್‌ ಅಳವಡಿಸಲು ಸಬ್ಸಿಡಿ

ಕರ್ನಾಟಕ ಸರ್ಕಾರ ಸೌರಶಕ್ತಿ ಬಳಕೆ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ರೈತರು ಸೋಲಾರ್ ಪಂಪ್‌ಸೆಟ್ ಅಳವಡಿಕೆ ಮಾಡಿಕೊಳ್ಳಲು ‘ಕುಸುಮ್ ಬಿ’ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ರೈತರು ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್‌ಸೆಟ್ ಅಳವಡಿಕೆ ಮಾಡಿಕೊಳ್ಳಬಹುದು. ಇದರಿಂದಾಗಿ ಸಂಪ್ರದಾಯಿಕ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸಲು, ಸೌರಶಕ್ತಿ ಬಳಕೆಯ ಉತ್ತೇಜನಕ್ಕೆ ಸರ್ಕಾರದಿಂದ ಶೇ 80ರಷ್ಟು ಹೆಚ್ಚಿನ ಸಹಾಯಧನ ನೀಡಲಾಗುತ್ತಿದೆ.ಕುಸುಮ್-ಬಿ ಯೋಜನೆಯಡಿ ರೈತರಿಗೆ ಸೌರ ಫಲಕಗಳು, ಸಬ್‌ಮರ್ಸಿಬಲ್/ ಸರ್ಫೇಸ್ ಡಿಸಿ ಪಂಪ್‌ಗಳು, ಮೌಂಟಿಂಗ್ ಸ್ಟ್ರಕ್ಚರ್, ಪ್ಯಾನಲ್ ಬೋರ್ಡ್, ಪೈಪ್ ಮತ್ತು ಕೇಬಲ್ ಸರಬರಾಜು ಮಾಡಲಾಗುತ್ತದೆ.ಕೃಷಿ ಭೂಮಿಯಲ್ಲಿ ಅಳವಡಿಸಲಾಗುವ ಸೋಲಾರ್ ಪಂಪ್‌ಗಳನ್ನು 5 ವರ್ಷಗಳ ಕಾಲ ಪೂರೈಕೆದಾರರೇ ಉಚಿತವಾಗಿ ನಿರ್ವಹಣೆ ಮಾಡಲಿದ್ದಾರೆ. ಸೋಲಾರ್ ಪಂಪ್‌ಸೆಟ್ ಅಳವಡಿಸಲು ರಾಜ್ಯ ಸರ್ಕಾರದ ಸಹಾಯಧನ, ಕೇಂದ್ರ ಸರ್ಕಾರದ …

Read more

ತೆಂಗು ಬೆಳೆಗಾರರೇ ಗಮನಿಸಿ, ಬೆಳೆ ವಿಮಾ ಯೋಜನೆ

ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ರೈತರು ತೆಂಗು ಬೆಳೆಯುತ್ತಾರೆ. ಆದರೆ ತೆಂಗಿನ ಗಿಡಗಳು, ಮರಗಳು ವಿವಿಧ ರೋಗಗಳಿಗೆ ತುತ್ತಾಗಿ ರೈತರಿಗೆ ನಷ್ಟವಾಗುತ್ತದೆ. ಆದ್ದರಿದ ತೆಂಗಿನ ಬೆಳೆಗಾರರಿಗೆ ನೆರವಾಗಲು ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ತೆಂಗು ಬೆಳೆಯುವ ರೈತರು ಈ ವಿಮಾ ಯೋಜನೆಯ ಮಾಹಿತಿ, ಬೇಕಾಗುವ ದಾಖಲೆಗಳ ಕುರಿತು ಮಾಹಿತಿ ತಿಳಿದಿರುವುದು ಅಗತ್ಯವಾಗಿದೆ.ತೆಂಗು ಬೆಳೆ ವಿಮಾ ಯೋಜನೆ ತೆಂಗಿನ ಗಿಡ/ ಮರಗಳಿಗೆ ಇರುವ ವಿಮಾ ಯೋಜನೆಯಾಗಿದ್ದು, ತೆಂಗು ಅಭಿವೃದ್ಧಿ, ಮಂಡಳಿಯವರು Agriculture insurance company ಅವರ ಸಹಯೋಗದೊಂದಿಗೆ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆರೋಗ್ಯವಂತ ತೆಂಗಿನ ಗಿಡಗಳು/ ಮರಗಳು (4 ರಿಂದ 60 ವರ್ಷ) ವಿಮೆಯ ವ್ಯಾಪ್ತಿಗೆ ಒಳಪಡುತ್ತವೆ. ರೈತರು ಕನಿಷ್ಠ 5 ತೆಂಗಿನ ಗಿಡಗಳು/ ಮರಗಳನ್ನು ಕಡ್ಡಾಯವಾಗಿ ವಿಮೆಗೆ ಒಳಪಡಿಸಬೇಕು 5ಕ್ಕಿಂತ ಕಡಿಮೆ ಸಂಖ್ಯೆ, ತೆಂಗಿನ …

Read more

ಕೃಷಿಯೇ ಮೊದಲು, ಆರೋಗ್ಯ ನಂತರ- ಡಲ್ಲೇವಾಲ್

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಪವಾಸ ಕೈಗೊಂಡಿರುವ ರೈತ ಮುಖಂಡ ಜಗಜಿತ್ ಸಿಂಗ್ ಅವರನ್ನು ಸೋಮವಾರ ಭೇಟಿ ಮಾಡಿದ ಸುಪ್ರೀಂ ಕೋರ್ಟ್ ನೇಮಿಸಿರುವ ಉನ್ನತಾಧಿಕಾರ ಸಮಿತಿಯು, ವೈದ್ಯಕೀಯ ನೆರವು ಪಡೆಯುವಂತೆ ಅವರನ್ನು ಒತ್ತಾಯಿಸಿತು. ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಲ್ಲೇವಾಲ್ ಅವರು ನ.26 ರಿಂದ ಅನಿರ್ಧಿಷ್ಟಾವಧಿ ಉಪವಾಸ ನಡೆಸುತ್ತಿದ್ದಾರೆ.“ತಮ್ಮ ಪಾಲಿಗೆ ಕೃಷಿ ಮೊದಲು, ಆರೋಗ್ಯ ನಂತರ” ಎಂದು ಡಲ್ಲೇವಾಲ್ ಅವರು ಸಮಿತಿಗೆ ಹೇಳಿದ್ದಾರೆ. ಮೂಲ : ಪ್ರಜಾವಾಣಿ

ಹೆಬ್ಬಾಳದಲ್ಲಿ “ಸಾವಯವ ಸಿರಿಧಾನ್ಯ ಹಬ್”: ಜ.23ರಂದು ಭೂಮಿ ಪೂಜೆ

ಸಿರಿಧಾನ್ಯ ಮತ್ತು ಸಾವಯವ ಪದಾರ್ಥಗಳ ಉತ್ಪಾದಕರು, ಮಾರುಕಟ್ಟೆದಾರರು, ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸುವ ಹಾಗೂ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶದಿಂದ ಕೃಷಿ ಇಲಾಖೆಯು ಹೆಬ್ಬಾಳದಲ್ಲಿ ‘ಸಾವಯವ -ಸಿರಿಧಾನ್ಯ ಹಬ್’ ನಿರ್ಮಾಣ ಮಾಡುತ್ತಿದೆ. ಕೇಂದ್ರ ಸರ್ಕಾರದ ₹12 ಕೋಟಿ, ರಾಜ್ಯ ಸರ್ಕಾರದ ₹8 ಕೋಟಿ ಅನುದಾನ ಸೇರಿ ಒಟ್ಟು ₹20 ಕೋಟಿ ವೆಚ್ಚದಲ್ಲಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ(ಆರ್‌ಕೆವಿವೈ) ಈ ಹಬ್ ನಿರ್ಮಾಣವಾಗುತ್ತಿದೆ. 18 ತಿಂಗಳಲ್ಲಿ ‘ಹಬ್‌’ ನಿರ್ಮಾಣ ಪೂರ್ಣಗೊಳಿಸಲು ಸಮಯ ನಿಗದಿಯಾಗಿದೆ. ಸಿರಿಧಾನ್ಯ ಸಾವಯವ ಉತ್ಪನ್ನಗಳ ಉತ್ಪಾದನೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ನವೋದ್ಯಮಗಳು, ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ), ರೈತ ಉತ್ಪಾದಕ ಕಂಪನಿಗಳು(ಎಫ್‌ಪಿಸಿ), ಸ್ವಸಹಾಯ ಸಂಘಗಳು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿವೆ. ಕೆಲ ಎಫ್‌ಪಿಒಗಳು ವಿದೇಶಗಳಿಗೂ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ. ಯಾರಿಗೆಲ್ಲ ಅನುಕೂಲ : …

Read more

ಬೆಳೆ ಹಾನಿ ತಪ್ಪಿಸಲು ಹವಾಮಾನ ಮುನ್ಸೂಚನಾ ಘಟಕ

ತೋಟಗಾರಿಕೆ ಇಲಾಖೆಯು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಸ್ವಯಂಚಾಲಿತ ಹವಾಮಾನ ಮುನ್ಸೂಚನಾ ಘಟಕವನ್ನು ಒದಗಿಸುತ್ತಿದೆ. ತೋಟಗಾರಿಕೆ ಬೆಳೆ ಬೆಳೆಯುವ ರೈತರು ಹವಾಮಾನ ವೈಪರೀತ್ಯದಿಂದ ಆಗುವ ನಷ್ಟ ತಪ್ಪಿಸಿ, ಉತ್ತಮ ಇಳುವರಿ ಪಡೆಯಲು ನೆರವಾಗುವುದು ಇದರ ಉದ್ದೇಶ. ಈ ಯಂತ್ರವು 3-4 ದಿನ ಮೊದಲೇ ಮಳೆಯಾಗುವ ಸಾಧ್ಯತೆಯ ಬಗ್ಗೆ ಮತ್ತು ಕೃಷಿ ಭೂಮಿಯಲ್ಲಿ ಲಭ್ಯವಿರುವ ನೀರಿನ ಪ್ರಮಾಣದ ಬಗ್ಗೆ ತಿಳಿಸುತ್ತದೆ. ಯಾವಾಗ ಎಷ್ಟು ನೀರನ್ನು ಬೆಳೆಗೆ ಹರಿಸಬೇಕು ಎಂದು ತಿಳಿಸುತ್ತದೆ. ಗಾಳಿಯ ವೇಗದ ಪ್ರಮಾಣದ ಜೊತೆಗೆ, ಬೆಳೆಗೆ ಯಾವ ಖಾಯಿಲೆ ಬರಬಹುದು,ಯಾವ ಔಷಧಿ ಸಿಂಪಡಿಸಬೇಕು ಮತ್ತು ಹನಿ ನೀರಾವರಿ ಮೂಲಕ ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಎಷ್ಟು ಸಿಂಪಡಿಸಬೇಕು ಎಂಬುದು ಸಹ ಗೊತ್ತಾಗುತ್ತದೆ. 2024-25 ಮತ್ತು 2025-26ನೇ ಸಾಲಿಗಾಗಿ ಈ ಯೋಜನೆ ರೂಪಿಸಲಾಗಿದೆ. ಪ್ರತಿ …

Read more

ಭತ್ತದ ಧಾರಣೆ ಕ್ವಿಂಟಾಲ್ ಗೆ ₹1000 ಕುಸಿತ

KRISHI-SHETRE-ME-KRINTIKARI-BADLAV

ಕಾವೇರಿ ಜಲಾನಯನ ವ್ಯಾಪ್ತಿಯ ಜಿಲ್ಲೆಗಳಲ್ಲಿ ಈ ಬಾರಿ ಭತ್ತದ ಇಳುವರಿ ಚೆನ್ನಾಗಿದ್ದರೂ, ಬೆಲೆ ಕುಸಿತದ ಪರಿಣಾಮದಿಂದಾಗಿ ರೈತರು ಕಂಗಾಲಾಗಿದ್ದಾರೆ. ಕಳೆದ ವರ್ಷ ಬರದ ಪರಿಣಾಮದಿಂದ ಭತ್ತಕ್ಕೆ ಸಾಕಾಗುವಷ್ಟು ನೀರಾವರಿ ಲಭ್ಯವಿರಲಿಲ್ಲ, ಫಸಲು ಕಡಿಮೆಯಾಗಿತ್ತು ಹಾಗೂ ಬೆಲೆ ಏರಿಕೆಯಾಗಿದೆ ಕ್ವಿಂಟಾಲ್ ಗೆ ₹3,200 ರಿಂದ ₹3,400 ದೊರೆತಿತ್ತು. ಈ ಭಾರಿ ಭತ್ತದ ಕೊಯ್ಲು ಆರಂಭವಾಗಿದ್ದು, ಶುರುವಿನಲ್ಲೇ ಬೆಲೆ ಕುಸಿದಿದೆ. ಕ್ವಿಂಟಾಲ್ ಗೆ ಸರಾಸರಿ ₹2,000 ದಿಂದ ₹2,200 ಕ್ಕೆ ದಲ್ಲಾಳಿಗಳು ಖರೀದಿಸುತ್ತಿದ್ದಾರೆ. ಜ್ಯೋತಿ ತಳಿಯ ಭತ್ತ ಕಳೆದ ಬಾರಿ ₹3,400 ರ ವರೆಗೆ ಮಾರಾಟವಾಗಿತ್ತು. ಪ್ರಸ್ತುತ ₹2,500 ದರವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕ್ವಿಂಟಾಲ್ ಗೆ ₹1,000 ಕಡಿಮೆಯಾಗಿರುವುದಾಗಿ ರೈತರು ಹೇಳುತ್ತಾರೆ. ಕೆ ಆರ್ ಎಸ್ ಹಾಗೂ ಕಬಿನಿ ಜಲಾಶಗಳು ಭರ್ತಿಯಾಗಿ, ಅಗತ್ಯ ನೀರಾವರಿ …

Read more

ರೈತರನ್ನು ಗೌರವಿಸಬೇಕು: ಸಿದ್ದಬಸಪ್ಪ

ರೈತರು ಬೆಳೆ ಬೆಳೆಯುವುದರಿಂದಲೇ ಮನುಜಕುಲ ಶಾಂತಿಯಿಂದ ಜೀವನ ನಡೆಸಲು ಸಾಧ್ಯ ಎಂದು ನಗರದ ಹೊಸ ಸೇತುವೆ ರಸ್ತೆ, ಸಿದ್ದಾರೂಢ ನಗರದಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾ ಸಂಸ್ಥೆ ಅಧ್ಯಕ್ಷ ಬಿ. ಸಿದ್ದಬಸವ ಹೇಳಿದರು. ಅವರು ವಿದ್ಯಾಸಂಸ್ಥೆಯಲ್ಲಿ ಆಯೋಜಿಲಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನ್ನ ನೀಡುವ ರೈತರನ್ನು ಪ್ರತಿಯೊಬ್ಬರು ಗೌರವಿ ಸುವುದು ಕರ್ತವ್ಯವಾಗಿದೆ ಎಂದರು. ಪ್ರಗತಿಪರ ರೈತರಾದ ಎ. ಪ್ರಕಾಶ್, ಅರಳಿಹಳ್ಳಿ ಹಾಗೂ ಜಿ.ಗೋಪಾಲ್ ತಳ್ಳಿಕಟ್ಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ರೈತ ಪ್ರಕಾಶ್ ಅವರು, ಕೃಷಿಯ ಐತಿಹಾಸಿಕ ಹಿನ್ನೆಲೆ ಕೃಷಿ ಚಟುವಟಿಕೆಯ ಅದ್ಭುತಾವಕಾಶಗಳನ್ನು ಹೊಂದಿದೆ. ಕೃಷಿ ಕೇವಲ ಮನುಜಕುಲಕ್ಕೆ ಮಾತ್ರವಲ್ಲ, ಸಕಲ ಜೀವರಾಶಿಗಳಿಗೂ ಅಗತ್ಯ ಎಂದರು. ಗೋಪಾಲ್ ಅವರು ಕೃಷಿ …

Read more

ಕೃಷಿ ಸಾಲ ಮೊತ್ತ ಹೆಚ್ಚಳ

ರೈತರಿಗೆ ಅಡಮಾನ ಸಾಲವಾಗಿ ನೀಡಲಾಗುವ ಕೃಷಿ ಸಾಲದ ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) 1.6 ಲಕ್ಷ ರೂ. ಗಳಿಂದ 2 ಲಕ್ಷ ರೂ.ಗೆ ಹೆಚ್ಚಿಸಿದ್ದು , ಇದು 2025 ರ ಜ. 1 ರಿಂದಲೇ ಜಾರಿಗೆ ಬರಲಿದೆ. ” ಈ ಹೊಸ ಮಾರ್ಗಸೂಚಿಯನ್ನು ತ್ವರಿತವಾಗಿ ಅಳವಡಿಸಿಕೊಂಡು ರೈತರಿಗೆ ಸುಲಭವಾಗಿ ಅಡಮಾನ ರಹಿತ ಸಾಲ ನೀಡಲು ಬ್ಯಾಂಕ್ ಗಳಿಗೆ ಸೂಚಿಸಲಾಗುವುದು. ಹೆಚ್ಚು ರೈತರನ್ನು ತಲುಪುವ ಉದ್ದೇಶದಿಂದ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಈಗಾಗಲೇ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ. ಇದರೊಂದಿಗೆ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಬಳಕೆಯನ್ನೂ ಉತ್ತೇಜಿಸಲಾಗುತ್ತಿದೆ. RBI ನ ಈ ತೀರ್ಮಾನದಿಂದ ಸಣ್ಣ ಹಾಗೂ ಅತಿಸಣ್ಣ ರೈತರನ್ನು ಒಳಗೊಂಡಂತೆ ಶೇ.86ರಷ್ಟು ರೈತರಿಗೆ ನೆರವಾಗಲಿದೆ, ಎಂದು ಕೃಷಿ ಸಚಿವಾಲಯ ಹೇಳಿದೆ. “ಹಣಕಾಸು ವಲಯ ವ್ಯಾಪ್ತಿಗೆ …

Read more

ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸಿದ ಸರ್ಕಾರ

ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, 2025ನೇ ಋತುವಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಲು ಶುಕ್ರವಾರ ನಡೆದ ಕೇಂದ್ರ ಸಚಿವಸಂಪುಟಸಭೆ ಅನುಮೋದಿಸಿದೆ. ಪ್ರತಿ ಕ್ವಿಂಟಲ್ ಉಂಡೆ ಕೊಬ್ಬರಿಗೆ 100 ರೂ. ಹಾಗೂ ಹೋಳಾದ (ಮಿಲ್ಲಿಂಗ್) ಕೊಬ್ಬರಿಗೆ ರೂ.420 ದರ ಹೆಚ್ಚಿಸಲಾಗಿದೆ. ಈ ಮೂಲಕ ಕ್ವಿಂಟಲ್ ಉಂಡೆ ಕೊಬ್ಬರಿಗೆ 12,100 ರೂ. ಹಾಗೂ ಹೋಳಾದ ಕೊಬ್ಬರಿಗೆ 11,582 ರೂ. ಬೆಂಬಲ ಬೆಲೆ ನಿಗದಿಪಡಿಸಲು 855 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದೆ. ಇಡೀ ದೇಶದ ಕೊಬ್ಬರಿ ಉತ್ಪಾದನೆ ಪೈಕಿ ಕರ್ನಾಟಕದ ಪಾಲು ಶೇ.32.7 ರಷ್ಟಿದೆ. ತಮಿಳುನಾಡು ಶೇ.25.7 ಹಾಗೂ ಕೇರಳ ಶೇ. 25.4ರಷ್ಟು ಪಾಲು ಹೊಂದಿವೆ.

ಕೃಷಿ ಸುದ್ದಿ ಬುಲೆಟಿನ್ ಕರ್ನಾಟಕ 20 ಡಿಸೆಂಬರ್ 2024

KRISHI-SHETRE-ME-KRINTIKARI-BADLAV

ಕೃಷಿ ಸುದ್ದಿ ಬುಲೆಟಿನ್ ಕರ್ನಾಟಕ 20 ಡಿಸೆಂಬರ್ 2024 ‘ತೊಗರಿ ಕಣಜ’ ಕಲಬುರಗಿಯಲ್ಲಿ ತೊಗರಿ ಇಳುವರಿ ಉತ್ತಮವಾಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಹೆಚ್ಚಿನ ಪ್ರಮಾಣದಲ್ಲಿ ಅವಕವಾಗುತ್ತಿದೆ. ಇದರಿಂದಾಗಿ ದರ ದಿಢೀರ್ ಕುಸಿದಿದ್ದು, ರೈತರು ಆತಂಕಗೊಂಡಿದ್ದಾರೆ. ಪ್ರಸಕ್ತ ವರ್ಷ ಜಿಲ್ಲೆಯ 5.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದ್ದು, ಸುಮಾರು 50 ಲಕ್ಷ ಕ್ವಿಂಟಲ್ ಇಳುವರಿಯ ನಿರೀಕ್ಷೆ ಇದೆ. ಈಗಾಗಲೇ, ಜಿಲ್ಲೆಯ ಎಪಿಎಂಸಿಗಳಿಗೆ 7 ಕಿಂಟಲ್ ತೊಗರಿ ಅವಕವಾಗಿದೆ. ಡಿಸೆಂಬರ್ 2ರಂದು ಕ್ವಿಂಟಲ್ ಗೆ ಗರಿಷ್ಠ ದರ ₹11,000 ಇತ್ತು. ಈಗ ₹9,013 ಕ್ಕೆ ತಲುಪಿದೆ. ಎರಡು ವಾರದ ಅವಧಿಯಲ್ಲಿ ದರ ₹1987 ಕುಸಿದಿದೆ.

ಕೃಷಿ ಕಿಸಾನಿ ನ್ಯೂಸ್ ಬುಲೆಟಿನ್: 12 ಡಿಸೆಂಬರ್ 2024

SARSO-CHANA-GEHUN-REPORT

ಬೆಳೆ ನಷ್ಟ ಪರಿಹಾರ ಬೇಡಿಕೆಗೆ ಸಿಗದ ಸ್ಪಂದನೆ: ಕೇಂದ್ರದ ವಿರುದ್ಧ ರಾಜ್ಯದ ಸಂಘರ್ಷ ಫೆಂಗಲ್‌ ಚಂಡಮಾರುತದ ವೇಳೆ ಸುರಿದ ಮಳೆಯಿಂದ ಬೆಳೆ ಹಾಳಾಗಿ ರೈತ ಸಮುದಾಯ ತೀವ್ರ ನಷ್ಟ ಅನುಭವಿಸಿದೆ. ಈ ನಷ್ಟ ಪರಿಹಾರಕ್ಕೆ ಸ್ಪಂದಿಸದ ಕೇಂದ್ರದ ಧೋರಣೆ ವಿರುದ್ಧ ಹೋರಾಟದ ಹಾದಿ ತುಳಿಯಲು ರಾಜ್ಯ ಸರಕಾರ ನಿರ್ಧರಿಸಿದೆ.ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಒಟ್ಟಾರೆ 1,51,084 ಹೆಕ್ಟೇರ್‌ ಬೆಳೆ ನಷ್ಟವಾಗಿದೆ. ಇದಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್‌) ಪರಿಹಾರ ನೀಡುವಂತೆ ವಿಧಾನಮಂಡಲ ಅಧಿವೇಶನದಲ್ಲಿ ಗೊತ್ತುವಳಿ ಅಂಗೀಕರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ತೊಗರಿ ಬೆಳೆದ ವಿಜಯಪುರ-ಕಲಬುರಗಿಯ ರೈತರು ಸಂಕಷ್ಟದಲ್ಲಿ: ಮುಂಗಾರು ಹಂಗಾಮಿನಲ್ಲಿ ಹೇರಳ ಮಳೆಯಾಗಿದ್ದರಿಂದ ಕಲಬುರಗಿ, ವಿಜಯಪುರ ಸೇರಿದಂತೆ ಉತ್ತರದ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಈಗ ರಾಜ್ಯದ 2ನೇ …

Read more